ಹಲೋ ಫ್ರೆಂಡ್ಸ್…
ಬಹಳ ದಿನಗಳಿಂದ ಏನನ್ನೂ ಬರೆಯಲಾಗಿಲ್ಲ. ಅದಕ್ಕೆ ಕಾರಣ ಸೋಮಾರಿತನವಂತೂ ಖಂಡಿತಾ ಅಲ್ಲ. ಪತ್ರಕರ್ತನೆಂಬ ಭೂಮಿ ಮೇಲಿನ ವಿಚಿತ್ರ ವೃತ್ತಿಯ ನನಗೆ ಈಗ ಯಾಕೆ ಬರೆಯಲಾಗಿಲ್ಲ ಎಂಬುದಕ್ಕೆ ಈ ಅಕಾಲಿಕ ಚುನಾವಣೆಯಿಂದ ಹಿಡಿದು, ಮತದಾರನ ಹೊಣೆಗೇಡಿತನದ ವರೆಗೆ ಯಾರನ್ನು ಬೇಕಾದರೂ ದೂಷಿಸಬಹುದು. ಹಾಗೇ ರಾಜಕೀಯ ಪಕ್ಷಗಳ ದಿಗ್ಗಜರನ್ನೂ.. ಆದರೆ, ಹಾಗೆ ಮಾಡುವುದು ತರವಲ್ಲ. ಆದ್ದರಿಂದ ಚುನಾವಣೆ ನನ್ನ ಸಮಯವನ್ನೆಲ್ಲಾ ಅರೆದು ಕುಡಿಯುತ್ತಿದೆ. ಹಾಗಾಗಿ ಬರೆಯಲು ಆಗುತ್ತಿಲ್ಲ ಎಂದಷ್ಟೇ ಹೇಳುವುದು ಸರಳ ಮತ್ತು ಸುರಕ್ಷಿತ! ಈ ಚುನಾವಣೆ ಮುಗಿದು, ಮತ ಎಣಿಕೆ ಆಗಿ, ಒಂದು ಜನಪ್ರತಿನಿಧಿಗಳ ಸರ್ಕಾರ ಎಂಬುದು (ಎಷ್ಟೇ ಕುಲಗೆಟ್ಟಿದ್ದರೂ!) ಬರೋವರೆಗೂ ಪುರುಸೊತ್ತಿಲ್ಲ! ಹಾಗಾಗಿ ಮುಂದಿನ ಒಂದೂವರೆ ತಿಂಗಳು ನನ್ನ ಬ್ಗಾಗ್ ಗೆ ರಜೆ! ಈ ನಡುವೆ ನನ್ನ ಬರವಣಿಗೆ ಏನಿದ್ದರೂ ರಾಜಕೀಯದ ಸುತ್ತ ಗಿರಕಿ ಹೊಡೆಯಲಿದೆ(ಆಸಕ್ತಿ ಇದ್ದರೆ, www.thesundayindian.com/kannada ಇಲ್ಲಿಗೆ ಇಣುಕಬಹುದು). ಹಾಗಾಗಿ ಅಲ್ಲೀವರೆಗೆ ಟಾಟಾ…!
Posted by shashi sampalli